ಆರತಿಯನು ಎತ್ತಿರೆ ಸದ್ಭಕ್ತರೆಲ್ಲರು

ಆರತಿಯನು ಎತ್ತಿರೆ ಸದ್ಭಕ್ತರೆಲ್ಲರು || ಪ ||

ಆರತಿಯನು ಎತ್ತಿರೆ
ಈರತಿಗೆ ರತಿಯಿಟ್ಟು ಸಾಕ್ಷಾತ
ಸಾರುತಿರೆ ಶ್ರುತಿಗಳು ಸದ್ಗುರು
ಚಾರುತರ ಕೀರತಿಯ ಪೋಲ್ವಗೆ || ೧ ||

ಜ್ಯೋತಿತ್ರಯಕೆ ತಳಗಿ ಮೇಲಕೆ ಆತು
ಬತ್ತಿಗಳೈದು ಎಡಬಲ
ಆತುರಿವ ಸುಜ್ಞಾನ ತೈಲವ
ನೀಡಿ ನೀಲಾಂಜನವ ಜಾಚುತ || ೨ ||

ಗಂಧ ಚಂದನ ಧರಿಸಿ ಕರ್ಪುರ
ವಂದೆ ಮನದಲಿ ಸುಟ್ಟು ಶೀಘ್ರದಿ
ವಂದಿಸುತ ನಿಜಬೋಧ ನಿತ್ಯಾ-
ನಂದದೊಳು ನಿರ್ಬೈಲ ಮೂರ್ತಿಗೆ || ೩ ||

ಸಾಲು ದೀವಿಗೆ ಕುಡಿಯ ಮಧ್ಯದಿ
ಲೋಲ ನಡುವಿನ ಆರುಣಕಿರಣದ
ಆಲಯದ ಗದ್ದಿಗೆಯೊಳೊಪ್ಪುವ
ಕಾಲಹರನಿಗೆ ಕೈ ಮುಗಿಯುತ || ೪ ||

ಪಿಡಿದು ನೀಲಾಂಜನ ಪ್ರಕಾಶವ
ತಡೆದು ತವಕದಿ ಸೂರ್ಯಮಂತ್ರವ
ನುಡಿದು ಶಿಶುನಾಳೇಶನಡಿಯೊಳು
ಬಿಡದ ಮನ ಮುಡಪಿಟ್ಟು ಮೌನದಿ || ೫ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರೀ ಫಕ್ಕೀರಸ್ವಾಮಿ ಶಿವಯೋಗಿ ಸಮರ್ಥ
Next post ಜಯವೆನುತ ಕೈಮುಗಿದು ನಮಿಸುವೆ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

cheap jordans|wholesale air max|wholesale jordans|wholesale jewelry|wholesale jerseys